13ನೇ ಶತಮಾನ ದಲ್ಲಿಮಧ್ವಾಚಾರ್ಯರು ಸ್ಥಾಪಿಸಿದ ಮಠದ 550ನೇ ಸಂಭ್ರಮಕ್ಕೆ ಪ್ರಧಾನಮಂತ್ರಿಯವರಿಗೆ ಆಹ್ವಾನ.

Share

13ನೇ ಶತಮಾನ ದಲ್ಲಿಮಧ್ವಾಚಾರ್ಯರು ಸ್ಥಾಪಿಸಿದ ಮಠದ 550ನೇ ಸಂಭ್ರಮಕ್ಕೆ ಪ್ರಧಾನಮಂತ್ರಿಯವರಿಗೆ ಆಹ್ವಾನ.

ಗೋವಾ ರಾಜ್ಯದ ಕಾಣಕೋನದಲ್ಲಿರುವ ಶ್ರೀ ಸಂಸ್ಥಾನ ಪರ್ತಗಾಳಿ ಜೀವೋತ್ತಮ ಮಠದಲ್ಲಿ ನಡೆಯುವ 550ನೇವಾರ್ಷಿಕೋತ್ಸವ ಸಂಭ್ರಮಕ್ಕೆ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆಆಹ್ವಾನಪತ್ರಿಕೆ ದೆಹಲಿಯಲ್ಲಿ ನೀಡಲಾಯಿತು.
ಈ ಸುಸಂದರ್ಭದಲ್ಲಿ ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಪರ್ತಗಾಳಿ ಜೀವೋತ್ತಮ ಮಠದ ಅಧ್ಯಕ್ಷರಾದ ಶ್ರೀನಿವಾಸ್ ಡೆಂಪೋ, ಉಪಾಧ್ಯಕ್ಷರಾದ ಆರ್. ಆರ್. ಕಾಮತ್ ಆಹ್ವಾನ ಪತ್ರವನ್ನು ನೀಡಿದರು.
13ನೇಶತಮಾನದಲ್ಲಿ ಮಧ್ವಾಚಾರ್ಯರು ಈ ಮಠವನ್ನು ಸ್ಥಾಪಿಸಿದ್ದು ಈ ಮಠದ ಐತಿಹಾಸಿಕ ಸಂಭ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಪ್ರೋತ್ಸಾಹ ಮತ್ತು ಬೆಂಬಲಕ್ಕಾಗಿ ಡಾ. ಪ್ರಮೋದ್ ಸಾವಂತ್ ಕೃತಜ್ಞತೆ ಸಲ್ಲಿಸಿದ್ದಾರೆ.

ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!