ಭಟ್ಕಳ ತಾಲೂಕಿನ ಅಳುವೆ ಕೊಡಿ ತೀರದಲ್ಲಿ ನಿನ್ನೆ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಓರ್ವ ಮೀನುಗಾರ ಶವವಾಗಿ ಪತ್ತೆ

Share

ಭಟ್ಕಳ ತಾಲೂಕಿನ ಅಳುವೆ ಕೊಡಿ ತೀರದಲ್ಲಿ ನಿನ್ನೆ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಓರ್ವ ಮೀನುಗಾರ ಶವವಾಗಿ ಪತ್ತೆಯಾಗಿದ್ದಾನೆ
ಇಂದು ಮಧ್ಯಾಹ್ನ ಹೊನ್ನೆಗದ್ದೆ ಕಡಲ ತೀರಕ್ಕೆ ಮೃತ ದೇಹ ತೇಲಿ ಬಂದಿದ್ದು ಸ್ಥಳೀಯ ಮೀನುಗಾರರು ಮೇಲಕೆತ್ತಿದ್ದಾರೆ. ಈ ಮೃತ ದೇಹ ಜಾಲಿಯ ರಾಮಕೃಷ್ಣ ಮೊಗೆರ್ ಇವರದ್ದಾಗಿದೆ.
ಬೆಳಿಗ್ಗೆಯಿಂದಲೇ ಮಂಡಳಿ ಹಾಗೂ ಅಳವೇ ಕೋಡಿ ಸಮುದ್ರದಲ್ಲಿ ಚಿಕ್ಕ ಪಾತಿದೋಣಿ ಮತ್ತು ನಾಡ ದೋಣಿಗಳು ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇನ್ನು ಮೂವರು ಪತ್ತೆಯಾಗಬೇಕಿದ್ದು ಶೋಧ ಕಾರ್ಯ ಮುಂದುವರೆದಿದೆ ಸತೀಶ್ , ಗಣೇಶ್ ಹಾಗೂ ನಿಶ್ಚಿತ್ ಮೊಗೆರ್ ಅವರ ಮೃತ ದೇಹ ಸಿಗಬೇಕಾಗಿದೆ.
ಮೀನುಗಾರಿಕಾ ಸಚಿವರಾದ ಶ್ರೀಮಂಕಾಳ ವೈದ್ಯರು ಮುಂಡಳ್ಳಿ ಹಾಗೂ ಅಳುವೆ ಕೋಡಿ ಪ್ರದೇಶಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಪರಿಶೀಲಿಸಿದ್ದಾರೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ

Leave a Reply

Your email address will not be published. Required fields are marked *

error: Content is protected !!