ಭಟ್ಕಳ: ಮತ್ತೊಮ್ಮೆ ಮೋದಿ ೨೦೨೪ ಗೋಡೆ ಬರಹ ದ ಅಂಗವಾಗಿ ಇಂದು ಭಟ್ಕಳ ಮಂಡಲದ ಹೊನ್ನಿಗದ್ದೆ ಬೂತ್ ನಲ್ಲಿ ವಿಧಾನ ಪರಿಷತ್ ವಿರೋದ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಯವರು “ಮತ್ತೊಮ್ಮೆ ಮೋದಿ ೨೦೨೪” : ಗೋಡೆ ಬರಹ ಕ್ಕೆ ಚಾಲನೆ ನೀಡಿದರು.
ಭಟ್ಕಳ ಮಂಡಲದ ಅಧ್ಯಕ್ಷರು ಹಾಗೂ ಜಿಲ್ಲಾ ಕಾರ್ಯದರ್ಶಿಯಾದ ಸುಬ್ರಾಯ ದೇವಡಿಗ, ಮಾಜಿ ಶಾಸಕರಾದ ಸುನೀಲ್ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಹಾಗೂ ಗೋಡೆ ಬರಹ ಅಭಿಯಾನದ ಸಂಚಾಲಕರಾದ ಶ್ರೀಕಾಂತ ನಾಯ್ಕ, ಎಸ್ ಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಗೊಂಡ, ಮಂಡಲ ಪ್ರಧಾನ ಕಾರ್ಯದರ್ಶಿ ಭಾಸ್ಕರ ದೈಮನೆ, ನಗರ ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಅರುಣ ನಾಯ್ಕ, ಹೆಬಳೆ ಪಂಚಾಯತ್ ಸದಸ್ಯರಾದ ವಿಜೇತ ಶೆಟ್ಟಿ ಹಾಗೂ ಹೊನ್ನಿಗದ್ದೆ ಬೂತ್ ನ ಪ್ರಮುಖರು, ಕಾರ್ಯಕರ್ತರು ಇದ್ದರು.